Left Om Logo

SHRI PANDHARINATHA VITTALA

Right Om Logo

Guruji's Personal Details

ಜನನ - ಬಾಲ್ಯ

ಶ್ರೀ ಪಂಢರಿನಾಥ ದಾಸರ ಪೂರ್ವಜರು ದೊಡ್ಡಬಳ್ಳಾಪುರದಲ್ಲಿ ಜಮೀನ್ದಾರರಾಗಿದ್ದರು. ದಾಸರ ಮುತ್ತಾತ ಮುನ್ನಿ ರಾಘವೇಂದ್ರಪ್ಪನವರು, ಇವರ ಮಗನೆ ಶ್ರೀ ವೆಂಕಟರಾಮಯ್ಯನವರು ದಾಸರತಾತ. ಇವರ ಮಗನೇ ಶ್ರೀ ಸೀತಾರಾಮಯ್ಯನವರು - ದಾಸರ ತಂದೆಯವರು. ದಾಸರ ತಾಯಿ ಸೀತಮ್ಮನವರು. ಹೆಸರಿಗೆ ತಕ್ಕಹಾಗೆ ಸೀತಾರಾಮರದು ಅನ್ನೋನ್ಯ ದಾಂಪತ್ಯ ಅದರ ಕುರುಹಾಗಿ, ಇವರಿಗೆ 10 ಜನ ಮಕ್ಕಳು, ಅದರಲ್ಲಿ 8 ಜನ ಹೆಣ್ಣು ಮಕ್ಕಳು ಒಬ್ಬ ಗಂಡುಮಗ- ವೆಂಕಟರಾಮು. ಅವನು ಬೆಳೆದು 2 - 3 ವರ್ಷದಲ್ಲಿ ತೀರಿಹೋದನು. ಕೊನೆಗೆ ದಾಸರ ತಂದೆ ತಾಯಿಯವರು ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಂತ್ರಾಲಯದಲ್ಲಿ ಮಾಡಿ, ನಮ್ಮ ಕಥಾ ನಾಯಕರನ್ನು ಪಡೆದರು. ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಹುಟ್ಟಿದ ಮಗುವಿಗೆ 'ರಾಘವೇಂದ್ರ' ಎಂದೇ ಹೆಸರಿಟ್ಟರು. ಇವರು ಹುಟ್ಟಿದ್ದು ದಾಸರ ನೆಲೆಯಾದ ಚಿತ್ರದುರ್ಗ. ಇವರ ತಂದೆ ಪಶು ವೈದ್ಯಶಾಲೆಯಲ್ಲಿ ಹಿರಿಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕೆಲಸವಾದ್ದರಿಂದ, ಊರೂರಿಗೆ ವರ್ಗವಾಗುತ್ತಿತ್ತು. ಚಿತ್ರದುರ್ಗದಿಂದ, ಚಳ್ಳಕೆರೆ. ಶಿವಮೊಗ್ಗ ಹಾಸನ ಚಿಕ್ಕಮಗಳೂರು, ಮುಂತಾದವುಗಳು ಕೊನೆಗೆ ಹಾಸನಕ್ಕೆ ವರ್ಗವಾಗಿ, 1956 ನೇ ಇಸವಿ, ಫೆಬ್ರುವರಿ 16 ನೇರೀಖಿನವರಿಗೆ ಅಲ್ಲಿಯೇ ಇದ್ದರು. ಕೆಲಸದಿಂದ ನಿರ್ವತ್ತರಾಗಿ 16/02/1956 ನೇ ದಿನ ಇಹ ಲೋಕತ್ಯಜಿಸಿದರು.

ಬಾಲಕ ರಾಘವೇಂದ್ರನಿಗೆ ತಂದೆ ಒಡನಾಟ ಪ್ರೀತಿ, ಮಾರ್ಗದರ್ಶನ ಹೆಚ್ಚು ಲಭ್ಯವಾಗಲಿಲ್ಲ. ತಂದೆ ವಿಧಿವಶರಾದ್ದರಿಂದ, ಕುಟುಂಬಕ್ಕೆ ದೊಡ್ಡ ಆಘಾತವಾಯಿತು. ಪತಿ ವಿಯೋಗದಿಂದ, ಇವರ ತಾಯಿ ತತ್ತರಿಸಿದರು. ಮಕ್ಕಳಿಗೆ ದಿಕ್ಕೇತೋಚಲಿಲ್ಲ. ಆದರೂ ಇವರ ತಂದೆ 3 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು. ಇನ್ನು 5 ಹೆಣ್ಣು ಮಕ್ಕಳಲ್ಲಿ, 1-2 ವರ್ಷ ಬೆಳೆದು 4 ಹೆಣ್ಣು ಮಕ್ಕಳು ತೀರಿಕೊಂಡಿದ್ದರು. ಇನ್ನು ಉಳಿದ ಒಬ್ಬಳು ಹೆಣ್ಣು ಮಗಳಿಗೆ ಬಂಧು ಮಿತ್ರರ ಸಹಾಯದಿಂದ ಹೇಗೋ ಮದುವೆ ಮಾಡಿ ಮುಗಿಸಿದರು. ಆದರೆ ಮಗ ಇನ್ನೂ ಚಿಕ್ಕವನು. ಅವನ ಶಿಕ್ಷಣದ ಹೊಣೆ ತಾಯಿಯ ಮೇಲೆ ಬಿತ್ತು. ಏನೂ ಆದಾಯವಿರಲಿಲ್ಲ. ರಾಘವೇಂದ್ರನ ದೊಡ್ಡ ಅಕ್ಕ ಭಾವ, ದೊಡ್ಡ ಮನಸ್ಸಿನವರು, ಅವರೇ 3 ವರ್ಷ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಶಿಕ್ಷಣದ ಭಾರವನ್ನು ಹೊತ್ತರು. ಹಾಗೂ ಹೀಗೂ 9ನೇ ತರಗತಿ ಮುಗಿದು 10 ನೇ ತರಗತಿಯೂ ಮುಗಿಯಿತು. 10 ನೇ ತರಗತಿಯಲ್ಲಿ ಬಾಲಕ ವಾರಾನ್ನದಿಂದ ಎಸ್.ಎಸ್.ಎಲ್.ಸಿ ಮುಗಿಸಿದನು, ಪ್ರಥಮ ಶ್ರೇಣಿಯಲ್ಲಿ ಮುಗಿಸಿದನು 61-62 ಶಿವಮೊಗ್ಗದಲ್ಲಿ, ತಾಯಿ ಜೊತೆಯಲ್ಲಿ ಶಿವಮೊಗ್ಗವನ್ನು ಬಿಟ್ಟು ಕಾರ್ಗಲಗೆ ಬಂದರು. ಅಲ್ಲಿ "ಶರಾವತಿ ವ್ಯಾಲಿ ಪ್ರಾಜೆಕ್ಟ್" ಎಕ್ಸಿಕ್ಯೂಟೀವ ಎಂಜಿನೀಯರ, ಸ್ಟೋರ್ ಡಿವಿಜ್‌ನ ನಲ್ಲಿ 65/- ರೂ ಗೆ ಕೆಲಸಕ್ಕೆ ಸೇರಿದರು. ಅಷ್ಟರಲ್ಲಿ ತಾಯಿ-ಮಗನ ನಿರ್ವಹಣೆ ಆಗಬೇಕಿತ್ತು.

ಎರಡು ವರ್ಷ ಹೇಗೊ ಕಳೆದು, 10 ರೂ ಹೆಚ್ಚು ಸಿಗುತ್ತೆ ಎನ್ನುವ ಆಶೆಯಿಂದ ಕಾರ್ಗಲ್ ಬಿಟ್ಟು ಸಾಗರಕ್ಕೆ ಬಂದು ಅಲ್ಲಿ ಎಕ್ಸಿಕ್ಯೂಟೀವ ಎಂಜಿನೀಯರ ನಂ : 4 ಕೌಂಟರ್ ಸರ್ವೇ ಡಿವಿಜ್‌ನ ಆಫೀಸಿನಲ್ಲಿ ಕೆಲಸಕ್ಕೆ ಸೇರಿದನು. ಜೀವನ ನಿರ್ವಹಣೆ ಇನ್ನೂ ಸುಲಭವಾಗಿರಲಿಲ್ಲ ಎರಡು ಮೂರು ಮನೆ ಪಾಠಗಳನ್ನು ಇಟ್ಟುಕೊಂಡರು. ಅನೇಕ ಕಡೆ ಒಳ್ಳೆಯ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು.
ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ, ದೇವರನ್ನು ಮರೆತಿರಲಿಲ್ಲ, ಸಾಗರದಲ್ಲಿದ್ದ ಒಂದು ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಿನವೂ ಬರುತ್ತಿದ್ದರು. ತಾಯಿಯವರು ಮಗನಿಗೆ ಒಳ್ಳೆಯ ಸಂಸ್ಕಾರವನ್ನೇ ಕಲಿಸಿದ್ದರು. ಯಾರ ಆಶ್ರಯವು ಇರದೆ ಇದ್ದುದರಿಂದ, ಮಗನ ಉಪನಯನವನ್ನು ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಮಧ್ಯದಲ್ಲಿ ಬೆಂಗಳೂರಿನ ""ಮಹಾಲೇಖಪಾಲರ"" (A.G's.Office) ಆಫೀಸಿನಲ್ಲಿ ಕೆಲಸಕ್ಕೆ ಹಾಕಿದ್ದ ಅರ್ಜಿಗೆ ಸಂದರ್ಶನಕ್ಕೆ ಕರೆ ಬಂದಿತು. ಸಂದರ್ಶನದಲ್ಲಿ ರಾಘವೇಂದ್ರರ ಭಾಷಾ ಪ್ರೌಢಿಮೆ, ಜ್ಞಾನಕ್ಕೆ ಸಂದರ್ಶನಕಾರರು ಮಾರು ಹೋಗಿ ಇವರನ್ನು ಆಯ್ಕೆ ಮಾಡಿದರು. ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಸಿಕ್ಕಿತ್ತು. ಜೀವನಕ್ಕೆ ಒಂದು ಭದ್ರ ನೆಲೆ ದೊರೆತಂತಾಯಿತು. ತಾಯಿಯವರನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ដ . 10-09-1964 ໐໐໖ ವಾಸವಾಯಿತು. ಅಕ್ಕ ಪಕ್ಕದಲ್ಲಿ ತುಂಬಾ ಒಳ್ಳೆಯ ಜನರು ಇದ್ದರು. ಅಂಥವರಲ್ಲಿ ಒಬ್ಬ ಗೃಹಸ್ಥರು ವಿಶಾಲ ಹೃದಯದಿಂದ ರಾಘವೇಂದ್ರರ ಉವನಯನವನ್ನು ತಾವೇ ನಿಂತು ಮಾಡಿದರು. ಉಪನಯನವಾದ ನಂತರ ಭಕ್ತಿಯಿಂದ ಗಾಯತ್ರಿಯ ಉಪಾಸನೆ ಮಾಡಿದರು. ಒಳೊಳ್ಳೆಯ ಸ್ವಪ್ನಗಳಾಗುತ್ತ ಬಂದವು. ಹಾಗೆಯೇ ರಾಘವೇಂದ್ರರ ಧಾರ್ಮಿಕ ಜೀವನ ಮತ್ತು ಲೌಕಿಕ ಜೀವನ ಮುಂದುವರೆಯಿತು. ಮಂತ್ರಾಲಯ ಗುರುಗಳ ಪ್ರಭಾವದಿಂದಾಗಿ ಮನೆಯಲ್ಲಿ ದಿನ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಾ ಹೋದವು. ಪ್ರತಿದಿನ ಬೆಳಗಿನ ಝಾವವೇ ಎದ್ದು ಸ್ನಾನ, ಸಂಧ್ಯಾವಂದನೆ, ಸುಪ್ರಭಾತಗಳ ಪಠಣ, ಶಾಲಿಗ್ರಾಮ ಪೂಜೆ ಮಾಡಲು ಶುರು ಮಾಡಿದರು. ಇವರ ಸೇವೆಗೆ ಮೆಚ್ಚಿ ಮಂತ್ರಾಲಯ ಪ್ರಭುಗಳು ಸ್ವಪ್ನದಲ್ಲಿ ಕಾಣೆಸಿಕೊಂಡರು. ಅದರಿಂದ ದಾಸರ ನಂಬಿಕೆ ಧೃಢವಾಗುತ್ತ ಹೋದವು. ಹರಿವಾಯುಗುರುಗಳಲ್ಲಿ ಭಕ್ತಿ ಹೆಚ್ಚುತ್ತಾ ಹೋದವು. ಮಂತ್ರಾಲಯ ಪ್ರಭುಗಳು ಇವರ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋದರು. ಇವರ ಅನೇಕ ಸಮಸ್ಯೆಗಳು ನಿವಾರಣೆಯಾದವು. ಮಂತ್ರಾಲಯ ಪ್ರಭುಗಳಲ್ಲಿ ವಿಶೇಷವಾದ ಭಕ್ತಿ ಅಭಿಮಾನಗಳು ಹುಟ್ಟಿಕೊಂಡು ನೆನೆಸಿಕೊಂಡಾಗಲೆಲ್ಲ ಮಂತ್ರಾಲಯಕ್ಕೆ ಓಡಿಹೋಗುವ ಪರಿಪಾಠವಾಯಿತು. ನಿರಂತರವಾಗಿ 10 ವರ್ಷ ಅಂದರೆ 1966ನೇ ಇಸವಿಯಿಂದ 1976 ರವರೆಗೆ ಶ್ರೀರಾಯರ, ಗುರುಗಳ ಸೇವೆ ನಿರಾತಂಕವಾಗಿ ಮುಂದುವರೆಯಿತು.

Guruji Image


ಮದುವೆ ಮತ್ತು ಗೃಹಸ್ಥಜೀವನ

ಕೆಲಸ ಖಾಯಂ ಸಿಕ್ಕಿದ ಮೇಲೆ ಕನ್ಯಾಪಿತೃಗಳ ದೃಷ್ಟಿ ಇವರ ಮೇಲೆ ಬಿತ್ತು. ಇವರನ್ನು ನೋಡಿದವರು ಇವರೆಡೆ ಆಯಸ್ಕಾಂತದಂತೆ ಸೆಳೆಯಲ್ಪಡುತ್ತಿದ್ದರು. ಅಜಾನುಬಾಹುಶರೀರ, ಹೊಂಬಣ್ಣ, ಮುಖದ ಮೇಲೆ ಶೋಭಿಸುತ್ತಿದ್ದ ಅಂಗಾರ ಅಕ್ಷಂತೆ, ಊರ್ಧ್ವಪುಂಡ್ರಗಳು, ಎಂಥಹವರನ್ನು ಮೋಡಿ ಮಾಡುತ್ತಿದ್ದವು. ದಿನವೂ ಪೂಜೆ ಜಪತಪಗಳಿಂದ ಅಪೂರ್ವವಾದ ಕಾಂತಿ ಮುಖದ ಮೇಲೆ ಬೆಳಗುತ್ತಿತ್ತು. ಇದನ್ನು ನೋಡಿ ಶ್ರೀ ಮತ್ತು ಶ್ರೀಮತಿ ಕಮಲಮ್ಮ ವೆಂಕರಾಮಯ್ಯ ದಂಪತಿಗಳು ತಮ್ಮ ಮಗಳಾದ ಸೌ॥ ಪ್ರೇಮಳನ್ನು ಇವರಿಗೆ ಕೊಟ್ಟು ಮದುವೆ ಮಾಡಲು ಪ್ರಸ್ಥಾಪಿಸಿದರು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟರು. ಒಂದು ಶುಭ ಮುಹೂರ್ತದಲ್ಲಿ ಅಂದರೆ 09-08-1966 ರಲ್ಲಿ, ರಾಘವೇಂದ್ರರಾಯರು ಗೃಹಸ್ಥ ಜೀವನದಲ್ಲಿ ಕಾಲಿರಿಸಿದರು.